ಮಕ್ಕಳು ಯಾವ ಭಾಷೆಯ ಮೂಲಕ ಚೆನ್ನಾಗಿ ಕಲಿಯುತ್ತಾರೆ ಎನ್ನುವ ವಿಷಯವನ್ನು ಕುರಿತು ವಾದವಿವಾದಗಳು ನಡೆಯುತ್ತಲೇ ಇವೆ. ಕರ್ನಾಟಕದಲ್ಲಿ ನಡೆಯುತ್ತಿರುವ ಈ ವಿವಾದಕ್ಕೆ ಎರಡು ಪಕ್ಷಗಳಿವೆ. ಒಂದು ಪಕ್ಷದವರು ಕನ್ನಡ ಪರವಾದವರು;ಇನ್ನೊಂದು ಪಕ್ಷದವರನ್ನು ಮೊದಲ ಪಕ್ಷದವರು ಕನ್ನಡ ವಿರೋಧಿಗಳು ಎಂದು ಗುರುತಿಸುತ್ತಾರೆ. ಕನ್ನಡ ಪರವಾದ ವಾದಿಗಳು ಮಕ್ಕಳಿಗೆ ಕನ್ನಡದ ಮೂಲಕ ಕಲಿಸುವುದು ಸರಿಯಾದ ಬಗೆಯೆಂದು ವಾದಿಸುತ್ತಾರೆ. read more »
ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸುವಾಗ ಕೆಲವು ಪದಗಳನ್ನು ನೀಡಿ ಅವುಗಳಿಗೆ 'ವಿರುದ್ಧಾರ್ಥ'ವನ್ನು ಬರೆಯಲು ಹೇಳುತ್ತಾರೆ. ಎಲ್ಲ ಪಾಠಗಳ ಕೊನೆಯಲ್ಲಿ ಬರುವ ಭಾಷಾಭ್ಯಾಸವೆಂಬ ಭಾಗದಲ್ಲಿ ಈ ವಿರುದ್ಧಾರ್ಥದ ಅಭ್ಯಾಸ ಸಾಮಾನ್ಯವಾಗಿ ಇದ್ದೇ ಇರುತ್ತದೆ. ತಂದೆ ತಾಯಂದಿರು ಕೆಲವೊಮ್ಮೆ ಮಕ್ಕಳ ಮನೆಗೆಲಸವನ್ನು ಮುಗಿಸುವ ಹೊಣೆ ಹೊತ್ತಾಗ ಹೀಗೆ ವಿರುದ್ಧಾರ್ಥಗಳನ್ನು ಮಕ್ಕಳಿಗೆ ಹೇಳಿಕೊಡ ಬೇಕಾದ ಪ್ರಸಂಗವನ್ನು ಎದುರಿಸುತ್ತಾರೆ. read more »
ನಾಡಿನ ತಿಳಿದ ಮಂದಿ ಊರುಗಳ ಹೆಸರು ಬದಲಾಯಿಸುವ ಉಮೇದನ್ನು ತೋರುತ್ತಿದ್ದಾರೆ.ಇದರಿಂದ ನಾಡಿನ ಜನರಿಗೆ ತಮ್ಮತನವನ್ನು ಕಾಯ್ದುಕೊಳ್ಳುವ ದಾರಿ ಸಿಗುತ್ತದೆ ಎನ್ನುತ್ತಿದ್ದಾರೆ. ಬೇರೆಯವರು ಬದಲಾಯಿಸಿದ ಹೆಸರನ್ನು ನಾವು ಮತ್ತೆ ಮೊದಲಿನಂತೆ ಮಾಡುವುದರಿಂದ ಕನ್ನಡದ ಚಹರೆಯನ್ನು ಕಾಯ್ದುಕೊಂಡಂತೆ ಆಗುವುದೆಂದು ಹೇಳುತ್ತಿದ್ದಾರೆ. ಹೀಗೆ ಹೆಸರು ಬದಲಾಯಿಸಬೇಕಾದ ಊರುಗಳ ಪಟ್ಟಿಯನ್ನು ಜನರು ತಮ್ಮಪಾಡಿಗೆ ತಾವು ತಯಾರಿಸುತ್ತಿದ್ದಾರೆ. read more »
ನಮ್ಮ ಶಾಲೆಗಳಲ್ಲಿ ಕನ್ನಡ ಕಲಿಕೆಗೆಂದು ಮೀಸಲಾದ ಯಾವುದೇ ಪಠ್ಯ ಪುಸ್ತಕವನ್ನು ತೆರೆದರೂ ಅದರ ಪಾಠಗಳ ಕೊನೆಯಲ್ಲಿ ವ್ಯಾಕರಣಾಂಶಗಳನ್ನು ಕುರಿತು ಮಾಹಿತಿ ಇರುತ್ತದೆ. ಕಲಿಸುವವರು ಮಕ್ಕಳಿಗೆ ಈ ವ್ಯಾಕರಣಾಂಶಗಳನ್ನು ಹೇಳಿಕೊಡುತ್ತಾರೆ. ಪರೀಕ್ಷೆಯಲ್ಲಿ ಮಕ್ಕಳ ವ್ಯಾಕರಣ ಕುರಿತ ತಿಳುವಳಿಕೆಯನ್ನು ಪ್ರಶ್ನೆಗಳನ್ನು ಕೇಳಿ ಮೌಲ್ಯಮಾಪನಮಾಡಲಾಗುತ್ತದೆ. ಕಲಿಕೆಯ ಈ ಕ್ರಮ ಎಷ್ಟು ಸರಿ ಎಂದು ನಾವೀಗ ಪ್ರಶ್ನಿಸಿಕೊಳ್ಳಬೇಕಾಗಿದೆ. read more »
ಕಳೆದ ಐವತ್ತು ವರ್ಷಗಳಲ್ಲಿ ಭಾರತದ ಭಾಷೆಗಳ ನಡುವಣ ಸಂಬಂಧಗಳಲ್ಲಿ ಹಲವಾರು ಪಲ್ಲಟಗಳಾಗುತ್ತಿವೆ. ಹಿಂದೆ ಗಣನೆಗೆ ಬಾರದಿದ್ದ ಹಲವು ಭಾಷೆಗಳು ಈಗ ರಾಜ್ಯಾಂಗದ ಎಂಟನೆಯ ಅನುಚ್ಚೇದದಲ್ಲಿ ಸೇರತೊಡಗಿವೆ. ಲಿಪಿ ಇಲ್ಲದ ಆದರೆ ಬಹುಜನರು ಬಳಸುತ್ತಿರುವ ಕೆಲವು ಭಾಷೆಗಳೀಗ ತಮಗೊಂದು ರಾಜ್ಯಾಂಗದತ್ತವಾದ ಸ್ಥಾನಮಾನಗಳು ಬೇಕೆಂದು ಹೋರಾಟಮಾಡಿ ಗೆಲ್ಲುತ್ತಿವೆ. read more »
ಪದವಿ ತರಗತಿಗಳಲ್ಲಿ ಕನ್ನಡವನ್ನು ವಿಶೇಷ ವಿಷಯವನ್ನಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಭಾಷೆಯನ್ನು ಕುರಿತ ಪಠ್ಯಕ್ರಮವೊಂದನ್ನು ಕಳೆದ ಅರ್ಧ ಶತಮಾನದಿಂದಲೂ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಇರಿಸಿಕೊಂಡಿದ್ದೇವೆ. ಕೆಲವು ವಿಷಯಗಳನ್ನು ವಿಸ್ತರಿಸುವ ಅಥವಾ ಕೆಲವನ್ನು ಹ್ರಸ್ವಗೊಳಿಸುವ ಕೆಲಸ ಮಾತ್ರ ಆಗಾಗ ನಡೆಯುತ್ತಿರುವಂತಿದೆ. read more »
ಭಾಷೆಯ ಪದಕೋಶವೊಂದು ಅಚ್ಚರಿ. ಏಕೆಂದರೆ ಅದು ಎಲ್ಲಿರುತ್ತದೆಂದು ಯಾರೂ ಹೇಳಲು ಬರುವುದಿಲ್ಲ. ನಿಘಂಟುಗಳನ್ನು ರಚಿಸಿ ಇಗೋ ಈ ಭಾಷೆಯಲ್ಲಿ ಇಂತಿಷ್ಟು ಪದಗಳಿವೆ ಎಂದೆಲ್ಲ ಹೇಳಿದರೂ ವಾಸ್ತವವಾಗಿ ಆ ಪದಗಳೆಲ್ಲ ಬಳಸುವವರಿಗೆ 'ಗೊತ್ತಿರುವುದಿಲ್ಲ'. ನಿಘಂಟನ್ನು ಬಾಯಿಪಾಠ ಮಾಡಿದರೆ ಭಾಷೆಯ ಮೇಲೆ ಹಿಡಿತ ಸಾಧಿಸಿದಂತೆ ಎಂದು ತಿಳಿದವರಿದ್ದಾರೆ. ಆದರೆ ಮಾತನಾಡುವ ಯಾರೂ ಹೀಗೆ ನಿಘಂಟುಗಳ ಬೆನ್ನು ಹತ್ತುವುದಿಲ್ಲ. ಹಾಗಾಗಿ ನಿಘಂಟು ನಮ್ಮ ಒಂದು ಕಾಲ್ಪನಿಕ ರಚನೆ. read more »
ಭಾಷೆಯನ್ನು ಕಲಿಸುವಾಗ ಸಮಾನಾರ್ಥಕ ಪದಗಳನ್ನು ಹೇಳಿಕೊಡುವ ಪದ್ಧತಿ ಇದೆ. ಸಂಸ್ಕೃತ ಭಾಷೆಯಲ್ಲಿ ಹೀಗೆ read more »
ಈಚೆಗೆ ಹೆಚ್ಚು ಕಳವಳ ಮೂಡಿಸುವ ದನಿಯಲ್ಲಿದ್ದ ವರದಿಯೊಂದು ಎಲ್ಲ ಕಡೆಗಳಲ್ಲೂ ಪ್ರಕಟಗೊಂಡಿತು. ಅದರಂತೆ ಕನ್ನಡ ನಾಡಿನ ಐದನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ನೂರಕ್ಕೆ ಅರವತ್ತು ಮಂದಿಗೆ ಒಂದೆರಡು ಕನ್ನಡ ವಾಕ್ಯಗಳನ್ನು ಕೂಡ ತಪ್ಪಿಲ್ಲದೆ ಓದಲು ಬರುವುದಿಲ್ಲ. ಎಲ್ಲರಲ್ಲೂ ಆತಂಕ ಮೂಡಿಸುವ ಸುದ್ದಿಯಿದು. read more »
ಕನ್ನಡ ಬರಹದಲ್ಲಿ ಹೆಚ್ಚಾಗಿ ಸಂಸ್ಕೃತ ಪದಗಳನ್ನು ಸೇರಿಸಲು ನಾವು ಹಿಂಜರಿಯುವುದಿಲ್ಲ. ಹಾಗೆ ಸಂಸ್ಕೃತ ಪದಗಳನ್ನು ಹೆಚ್ಚು ಬಳಸುವುದು ಏಕೆಂದು ಕೇಳಿದರೆ ಹಾಗೆ ಮಾಡುವುದು ಸರಿಯೆಂದು ಒಪ್ಪಿಸುವ ಮಾತುಗಳನ್ನೂ ಹೇಳುತ್ತೇವೆ. ಒಂದು: ಕನ್ನಡದಲ್ಲಿ ತಕ್ಕ ಪದಗಳಿಲ್ಲದೇ ಇರುವುದರಿಂದ ಹೀಗೆ ಸಂಸ್ಕೃತ ಪದಗಳನ್ನು ಬಳಸುತ್ತೇವೆ. read more »
Recent comments
1 year 51 weeks ago
2 years 7 weeks ago
2 years 7 weeks ago
2 years 14 weeks ago
2 years 14 weeks ago